27/09/2021
🌹"ಬಡವರ ಬದುಕು"🌹
ನಾವು ಸಣ್ಣ ಪುಟ್ಟ ವಿಷಯದಲ್ಲಿ ಸಲೀಸಾಗಿ ಖುಷಿ ಹುಡುಕತೀವಿ
ನಾವು ಸಂತೋಷ ನ ಹುಡುಕೊ
ಅವಶ್ಯಕತೆ ಇಲ್ಲ, ಯಾಕಂದ್ರೆ ನಾವು
ಪ್ರತಿದಿನದ ಜೀವನವೇ ಒಂದು ಸಂತೋಷ , ನಮ್ಮ ಜೀವನದಲ್ಲಿ ಕಷ್ಟ, ಸುಖಾ, ದುಃಖ, ನೆಮ್ಮದಿ, ಸಂತೋಷ ಎಲ್ಲಾ ಸರಿ ಸಮಾನವಾಗಿ ಬರುತ್ತವೆ ನಾವು ಎಲ್ಲವನ್ನೂ ಸ್ವೀಕರಿಸುವ ಮನೋಭಾವ ಆ ದೇವರು ಕರುಣಿಸಿದ್ದಾನೆ ಇಷ್ಟು ಸಾಕಲ್ಲವೇ ನಮಗೆ,
ನಮಗೆ ಯಾವ ಮೇಧಾವಿ ಗಳು ಮಾಡುವ ಭಾಷಣದ ಮೂಲಕ ಜೀವನ ನಡೆಸುವುದಿಲ್ಲ ನಮಗೆ ನಮ್ಮ ಮನೆಯ ಹಿರಿಯರೇ ಬದುಕಿ ಬಾಳಿದ ದಾರಿಯಲ್ಲಿ ಹೊಗುತ್ತೆವೆ ಅದೇ ನಮಗೆ ಸ್ಪೂರ್ತಿ ನಮ್ ತಂದೆ ತಾಯಿ 2 ರಿಂದ 3 ರೂಪಾಯಿಗೆ ದಿನವಿಡೀ ದುಡಿದು ಜೀವನ ನಡೆಸುತ್ತಾ ನಮ್ಮನ್ನು ಬೆಳೆಸಿದ್ದಾರೆ ನಮ್ಮ ಹಿರಿಯರು, ಅವರಿಗಿಂತ ದೊಡ್ಡ ಸ್ಪೂರ್ತಿ ಇನ್ನಾರು ಇರುವುದಿಲ್ಲ "" ನಾವು ತಿನ್ನುವ ಅನ್ನ, ನಮಗೆ ಹೊಟ್ಟೆ ಹಸಿವು ನೀಗಿಸುವಷ್ಟು ಮಾತ್ರ ನಮ್ಮದು ಅದರ ಮೇಲೆ ಒಂದು ತುತ್ತು ಅನ್ನದ ಹಗಳು ನಮ್ಮದಲ್ಲ. ""ಎಂದು ಭಾವಿಸಿ ಜೀವನ ಮುಂದೆ ಸಾಗಿಸುವ ನಿಷ್ಕಲ್ಮಶ ಮನಸ್ಸು ನಮ್ಮದು
👆👆 ಇದಾವುದೂ ಶ್ರೀಮಂತರ ಸ್ವತ್ತು ಅಲ್ಲ , ಕೋಟಿ ಕೊಟ್ಟರೂ ಸಿಗುವುದಿಲ್ಲ, ನೆನಪಿರಲಿ .. ಶ್ರೀಮಂತರಿಗೆ ಇದು ಕನಸಿನ ಮಾತು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಅಹಂಕಾರ, ದರ್ಪ, ನಾನು, ನನ್ನಿಂದ , ಎನ್ನುವ ಸ್ವಾರ್ಥ ಬಿಟ್ಟು ಹೊಗಬೇಕು ಭಿಕ್ಷುಕ ನಲ್ಲಿಯೂ ದೇವರನ್ನ ಕಾಣಿ , ದಾನ ಧರ್ಮ ಮಾಡಿ ಹಾಗ ಜೀವಕ್ಕು, ಜೀವನಕ್ಕೂ, ಮನುಷ್ಯತ್ವಕ್ಕೂ ಒಂದು ಅರ್ಥ ಸಿಗುತ್ತೆ.
ನಾನು engineer ಮಗ, ನಾನು business man, ಮಗ, ನಾನು doctor ಮಗ ಅಂತ ಹೇಳಿಕೊಂಡು ತಿರುಗುವ ಮಕ್ಕಳ ಹಾಗೆ ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ರೈತನ ಕುಟುಂಬಕ್ಕೆ ಗೌರವ ಸಿಗಬೇಕು ಎಂಬುದು ನನ್ನ ಅಭಿಪ್ರಾಯ.
"ಸರ್ವೇ ಜನಾಃ ಸುಖಿನೋ ಭವಂತು"
✍ ಬಸವೇಶ್ ನಾಯಕ್ ಸಿಂಧನೂರು 🙏🙏🙏🙏9741375540