SLJ TV

SLJ TV SLJTV KANNADA
(1)

ಶಿವಾನಂದ ನೀಲಣ್ಣವರ ಇವರಿಗೆ ಬೆಂಗಳೂರಿನ 92 ನೇ ಸೀಟಿ ಸೀವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮದ್ಯಂತರ ಜಾಮೀನು ಮಂಜೂರು ಮಾಡಿದೆ... ಸೋಮವಾರ ಅಥವಾ ಮ...
12/06/2026

ಶಿವಾನಂದ ನೀಲಣ್ಣವರ ಇವರಿಗೆ ಬೆಂಗಳೂರಿನ 92 ನೇ ಸೀಟಿ ಸೀವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮದ್ಯಂತರ ಜಾಮೀನು ಮಂಜೂರು ಮಾಡಿದೆ... ಸೋಮವಾರ ಅಥವಾ ಮಂಗಳವಾರ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ..... ಈ ಕೇಸಿನ್ ವಕಾಲತನ್ನು R. G. Patil and Sudhir Nirwani ವಕೀಲರು ವಹಿಸಿಕೊಂಡಿದ್ದರು..

ಚಿಕ್ಕೋಡಿ ಬ್ರೆಕಿಂಗ್2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಆಸ್ಪತ್ರೆಯಲ್ಲೇ ಗ್ಲುಕೋಸ್  ಬಾಟಲ್ ನಲ್ಲಿ ವಿಷ ಹಾಕಿ ಕೊಲೆ ಶಂಕೆಪತ್ನಿಯಿಂದಲ...
12/06/2026

ಚಿಕ್ಕೋಡಿ ಬ್ರೆಕಿಂಗ್
2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ

ಆಸ್ಪತ್ರೆಯಲ್ಲೇ ಗ್ಲುಕೋಸ್ ಬಾಟಲ್ ನಲ್ಲಿ ವಿಷ ಹಾಕಿ ಕೊಲೆ ಶಂಕೆ

ಪತ್ನಿಯಿಂದಲೇ ಮಾಜಿ ಸೈನಿಕನ‌ ಕೊಲೆ ಮಾಡಿರುವ ಶಂಕೆ

ರಸ್ತೆ ಅಪಘಾತ ಆಗಿದ್ದನ್ನೇ ದಾಳವಾಗಿಸಿಕೊಂಡು ಮರ್ಡರ್

ಮೂರು ತಿಂಗಳ ಬಳಿಕ ಹೊತ್ತಿದ್ದ ಶವವನ್ನ ಹೊರತೆಗೆದ ಅಧಿಕಾರಿಗಳು

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಘಟನೆ

ಯಮಕನಮರಡಿ ಪೊಲೀಸರಿಂದ ಮುಚ್ಚಿ ಹೋಗಿದ್ದ ಪ್ರಕರಣ ಪತ್ತೆ

ಘೋಡಗೇರಿ ಗ್ರಾಮದ ಮಾಜಿ‌ ಸೈನಿಕ ಸಂದೀಪ್ ಮಾಂಜರಿ(45) ಕೊಲೆ

ಹುಕ್ಕೇರಿಯಲ್ಲಿ ನಡೆದ ದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ರಸ್ತೆ ಅಪಘಾತ

ಅನಂತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಂದೀಪ್ ದಾಖಲು

ಪ್ರಿಯಕರನೊಂದಿಗೆ ಸೇರಿ ಹೆಂಡತಿಯಿಂದ ಕೊಲೆಗೆ ಸಂಚು

ಅನೈತಿಕ ಸಂಬಂಧ ಹೊರಬರಬಾರದು, ಗಂಡ ಸತ್ತರೆ ವಿಮೆ ಹಣ ಬರುತ್ತೆ ಎಂದು ಸ್ಕೆಚ್ ಹಾಕಿ ಕೊಲೆ

ಪತ್ನಿ ‌ಸುಮಾ ಮಾಂಜರಿ, ಪ್ರಿಯಕರ ಪುಂಡಲೀಕ ಎಂಬಾತನಿಂದ ಕೃತ್ಯ ಎಂದು ಕುಟುಂಬಸ್ಥರ ಆರೋಪ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನಿಗೆ ಚಟ್ಟ ಕಟ್ಟಿದ ಐನಾತಿ ಹೆಂಡತಿ

ಗ್ಲೂಕೋಸ್ ಬಾಟಲ್ ನಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರ

ಸಾವಿನ ಬಳಿಕ ಅನುಮಾನ ವ್ಯಕ್ತಪಡಿಸಿ ತನಿಖೆಗಿಳಿದಾಗ ಕೊಲೆ ರಹಸ್ಯ ಬೆಳಕಿಗೆ

ಬೆಳಗಾವಿ ಎಸಿ ಶ್ರವಣಕುಮಾರ ಸಮ್ಮುಖದಲ್ಲಿ ಹೂತ್ತಿದ್ದ ಶವ ಹೊರಕ್ಕೆ

ಶವದಲ್ಲಿನ ಅವಶೇಷಗಳನ್ನ ಮತ್ತೊಮ್ಮೆ ಎಫ್‌ಎಸ್‌ಎಲ್ ಗೆ ರವಾನೆ

ಎಫ್‌ಎಸ್‌ಎಲ್ ನಿಂದ ವರದಿ ಬಂದ ಬಳಿಕ ಮುಂದಿನ ಕ್ರಮ

ಈಗಾಗಲೇ ಪತ್ನಿ, ಪ್ರಿಯಕರ ಇಬ್ಬರಿಗೂ ತೀವ್ರ ವಿಚಾರಣೆ ನಡೆಸಿರುವ ಪೊಲೀಸರು‌

ಎಫ್‌ಎಸ್‌ಎಲ್ ವರದಿ ಬಳಿಕ ಕೊಲೆಯ ರಹಸ್ಯ ಬಯಲು

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಪ್ರಕರಣ ದಾಖಲು

12/06/2026

ಕೊಟ್ಟಿಯೂರು ದೇವಾಲಯ: ಪೌರಾಣಿಕ ಮಹತ್ವ ಹೊಂದಿರುವ ಪ್ರಸಿದ್ಧ ಶಿವಕ್ಷೇತ್ರ
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ನೆಲೆಗೊಂಡಿರುವ Kottiyoor Temple ದೇಶದ ಪ್ರಮುಖ ಶಿವಕ್ಷೇತ್ರಗಳಲ್ಲಿ ಒಂದಾಗಿದೆ. ದಟ್ಟ ಅರಣ್ಯ, ನದಿ ಹಾಗೂ ಪ್ರಕೃತಿಯ ಮಡಿಲಿನಲ್ಲಿ ಇರುವ ಈ ದೇವಾಲಯ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.
ಪೌರಾಣಿಕ ಕಥೆಗಳ ಪ್ರಕಾರ, ದಕ್ಷ ಯಜ್ಞ ನಡೆದ ಸ್ಥಳವೆಂದು ಈ ಕ್ಷೇತ್ರವನ್ನು ಭಕ್ತರು ನಂಬುತ್ತಾರೆ. ಪ್ರತಿವರ್ಷ ನಡೆಯುವ ವೈಭವದ ಕೊಟ್ಟಿಯೂರು ಮಹೋತ್ಸವದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ವಿಶಿಷ್ಟ ಸಂಪ್ರದಾಯಗಳು, ಪ್ರಕೃತಿ ಸೌಂದರ್ಯ ಹಾಗೂ ಧಾರ್ಮಿಕ ಮಹತ್ವದಿಂದ ಕೊಟ್ಟಿಯೂರು ದೇವಾಲಯವು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದು, ದಕ್ಷಿಣ ಭಾರತದ ಪ್ರಮುಖ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಬೆಳಗಾವಿ ಗ್ರಾಮೀಣ, ನಗರ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ನ ಸಂಯುಕ್ತ ಆಶ್ರಯದ "ವಿಶೇಷ ಮತದಾರರ ...
12/06/2026

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಬೆಳಗಾವಿ ಗ್ರಾಮೀಣ, ನಗರ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ನ ಸಂಯುಕ್ತ ಆಶ್ರಯದ "ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)" ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದೆ.

​ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸುವುದು, ತಪ್ಪುಗಳನ್ನು ತಿದ್ದುಪಡಿ ಮಾಡುವುದು ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಕುರಿತು ಕಾರ್ಯಕ್ರಮದಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು. ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸುವುದು ಇಂದಿನ ಅಗತ್ಯವಾಗಿದೆ.

ಜಾಗೃತ ಮತದಾರ – ಸದೃಢ ಪ್ರಜಾಪ್ರಭುತ್ವ. 🇮🇳

12/06/2026

'ಕಿಡಿಗೇಡಿಗಳನ್ನಂತೂ ಬಿಡಲ್ಲ, ಬೆನ್ನತ್ತಿ ಶಿಕ್ಷೆ ಕೊಡಿಸುತ್ತೇನೆ': ಫೇಕ್​ ಡೆತ್ ನ್ಯೂಸ್​ಗೆ ದೊಡ್ಡಣ್ಣ ರಿಯಾಕ್ಷನ್​!
#ದೊಡ್ಡಣ್ಣ

12/06/2026

Satish Jarkiholi On Dk Shivakumar: ಮುಂದಿನ 5 ವರ್ಷಕ್ಕೂ ಡಿಕೆ ಶಿವಕುಮಾರ್​ ಸಿಎಂ ಆಗ್ತಾರಾ?

ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದಂದು, ಪ್ರತಿಯೊಂದು ಮಗುವಿಗೂ ಶಿಕ್ಷಣ, ಆಟ-ಪಾಠ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಅವಕಾಶ ದೊರೆಯಬೇಕು ಎಂಬ ನ...
12/06/2026

ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದಂದು, ಪ್ರತಿಯೊಂದು ಮಗುವಿಗೂ ಶಿಕ್ಷಣ, ಆಟ-ಪಾಠ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಅವಕಾಶ ದೊರೆಯಬೇಕು ಎಂಬ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ.

ಮಕ್ಕಳ ಭವಿಷ್ಯವನ್ನು ದುಡಿಮೆಗೆ ಸೀಮಿತಗೊಳಿಸದೆ, ಅವರ ಪ್ರತಿಭೆ ಮತ್ತು ಕನಸುಗಳಿಗೆ ಬೆಳಕು ನೀಡುವ ಸಮಾಜವನ್ನು ನಿರ್ಮಿಸೋಣ. ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಕೈಜೋಡಿಸೋಣ.

On World Day Against Child Labour, let us reaffirm our commitment to ensuring that every child has access to education, play, and opportunities to pursue their dreams.

Let us build a society where children's futures are not limited by labour, but illuminated by their talents and aspirations. Together, let us work towards the eradication of child labour.

12/06/2026

ಕ್ರೀಡಾ ಖಾತೆ ನನಗೆ ಕೊಟ್ಟಿದ್ದರೆ ರಾಜ್ಯ ಮಟ್ಟದಲ್ಲಿ
ಕ್ರಾಂತಿ ಮಾಡಬಹುದಿತ್ತು...! ಸತೀಶ್ ಜಾರಕಿಹೊಳಿ

ಕುಂದಿರಗಿ ಗ್ರಾಮದಲ್ಲಿ ಚಿರಿತೆ ಕಂಡು ಬಂದಿದೆ ಕಾರಣ ಸುತ್ತಮುತ್ತಲಿನ ಗ್ರಾಮದವರು ಎಚ್ಚರಿಕೆಯಿಂದ ಇರಬೇಕು ಎಂದು  ಅರಣ್ಯ ಅಧಿಕಾರಿಗಳು ತಿಳಿಸಿದ್ದ...
12/06/2026

ಕುಂದಿರಗಿ ಗ್ರಾಮದಲ್ಲಿ ಚಿರಿತೆ ಕಂಡು ಬಂದಿದೆ ಕಾರಣ ಸುತ್ತಮುತ್ತಲಿನ ಗ್ರಾಮದವರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ

ಕುಟುಂಬದೊಂದಿಗೆ ಯಲ್ಲಮ್ಮನ ದರ್ಶನ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ಬೆಳಗಾವಿ ಜಿಲ್ಲೆಯ ಸವದತ್ತಿಯ ಪವಿತ್ರ ಕ್ಷೇತ್ರವಾದ ಯಲ್ಲಮ್ಮನ...
12/06/2026

ಕುಟುಂಬದೊಂದಿಗೆ ಯಲ್ಲಮ್ಮನ ದರ್ಶನ ಪಡೆದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್

ಬೆಳಗಾವಿ ಜಿಲ್ಲೆಯ ಸವದತ್ತಿಯ ಪವಿತ್ರ ಕ್ಷೇತ್ರವಾದ ಯಲ್ಲಮ್ಮನ ಸನ್ನಿಧಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ಗುರುವಾರ ತಮ್ಮ ಕುಟುಂಬ ಸಮೇತವಾಗಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಲ್ಲಮ್ಮನಗುಡ್ಡದಲ್ಲಿ ಸುಮಾರು ರೂ. 215 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್‌ಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ, 11 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧವಾಗಿದ್ದು, ಕಾಲಮಿತಿಯಲ್ಲಿ ಅದನ್ನು ಅನುಷ್ಠಾನಗೊಳಿಸಿ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ, ಮಗಳು ರೂಹಿ ಜನಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತವಾಗಿ ಯಲ್ಲಮ್ಮನ ದರ್ಶನಕ್ಕೆ ಬಂದಿರುವುದಾಗಿ ಅವರು ತಿಳಿಸಿದರು. “ಶ್ರೀಕ್ಷೇತ್ರವು ಜಾಗೃತವಾದ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಭಕ್ತರು ಭಯ-ಭಕ್ತಿ ಹಾಗೂ ಶ್ರದ್ಧೆಯಿಂದ ದೇವಿಯನ್ನು ಪ್ರಾರ್ಥಿಸಿ ಪುಣಿತರಾಗಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅವರ ಪತ್ನಿ ಅಂಕಿತಾ ಸೇರಿದಂತೆ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕೀರಪೂರ, ಅಯ್ಯನ್, ರೂಹಿ, ಮದು, ಸವದತ್ತಿ ನಗರಸಭೆ ಪೌರಾಯುಕ್ತ ಸಂಗನಬಸಯ್ಯ, ಮಲ್ಲು ಜಕಾತಿ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಅಂಗಡಿ, ಅಮೀನ್ ಗೋರಿನಾಯ್, ಪ್ರಭು ಹಂಜಗಿ, ಸದಾನಂದ ಈಟಿ, ಜಗದನಗೌಡ ಪೊಲೇಶಿ, ಮಂಜುನಾಥಗೌಡ ಸಂಧಿಮನಿ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.

Address

Gokak

Telephone

+918722796002

Website

Alerts

Be the first to know and let us send you an email when SLJ TV posts news and promotions. Your email address will not be used for any other purpose, and you can unsubscribe at any time.

Share

Category